ಭಾನುವಾರ, ಜನವರಿ 26, 2014

GENERAL KNOWLEDGE FOR ALL: HOW TO MAKE SYMBOLS WITH KEYBOARD

GENERAL KNOWLEDGE FOR ALL: HOW TO MAKE SYMBOLS WITH KEYBOARD

Alt + 0153..... ™... trademark symbol
Alt + 0169.... ©.... copyright symbol
Alt + 0174..... ®....registered trademark symbol
Alt + 0176 ...°......degre­e symbol
Alt + 0177 ...±....plus-or­-minus sign
Alt + 0182 ...¶.....paragraph mark
Alt + 0190 ...¾....fractio­n, three-fourths
Alt + 0215 ....×.....multi­plication sign
Alt + 0162...¢....the cent sign
Alt + 0161.....¡..... .upside down exclamation point
Alt + 0191.....¿..... ­upside down question mark
Alt + 1...........smiley face
Alt + 2 ......☻.....bla­ck smiley face
Alt + 15.....☼.....su­n
Alt + 12......♀.....f emale sign
Alt + 11.....♂......m­ale sign
Alt + 6.......♠.....s­pade
Alt + 5.......♣...... ­Club
Alt + 3............. ­Heart
Alt + 4.......♦...... ­Diamond
Alt + 13......♪.....e­ighth note
Alt + 14......♫...... ­beamed eighth note
Alt + 8721.... ∑.... N-ary summation (auto sum)
Alt + 251.....√.....s­quare root check mark
Alt + 8236.....∞..... ­infinity
Alt + 24.......↑..... ­up arrow
Alt + 25......↓...... ­down arrow
Alt + 26.....→.....ri­ght arrow
Alt + 27......←.....l­eft arrow
Alt + 18.....↕......u­p/down arrow
Alt + 29......↔... left right arrow

Source: Internet

ಗುರುವಾರ, ಜನವರಿ 23, 2014

ನೀವು ಅರೋಗ್ಯವಾಗಿ ಹೆಚ್ಚು ಕಾಲ ಬದುಕ ಬೇಕಾದರೆ ಮಾಡಾಬೇಕಾದ ಕೆಲವು ಕಾರ್ಯಗಳು


Courtesy: upayukta mahiti, Internet source.

ನೀವು ಅರೋಗ್ಯವಾಗಿ ಹೆಚ್ಚು ಕಾಲ ಬದುಕ ಬೇಕಾದರೆ ಮಾಡಾಬೇಕಾದ ಕೆಲವು ಕಾರ್ಯಗಳು. 

೧. ನೀವು ಹದಿನೆಂಟನೇ ವಯಸ್ಸಿನಲ್ಲಿ ಎಷ್ಟು ತೂಕವಿದ್ದಿರೋ ಈಗಲೂ ಹೆಚ್ಚು ಕಡಿಮೇ ಅದೇ ತೂಕ ದಲ್ಲಿರುವಂತೆ ನೊಡಿಕೊಳ್ಳಿ. ಮುಖ್ಯವಾಗಿ ನಿಮ್ಮ ಈಗಿನ ಸೊಂಟದ ಸುತ್ತಳತೆ ನಿಮ್ಮ ಹದಿನೆಂಟನೇ ವಯಸ್ಸಿನಲ್ಲಿ ಎಷ್ಟಿತ್ತೊ ಅಷ್ಟೇ ಇರುವಂತೆ ನೋಡಿಕೊಳ್ಳಿ. ಇದರಿಂದ ಹೃದಯದ ಖಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ. 

೨. ದಿನದಲ್ಲಿನ ಒಂದು ಹೊತ್ತು ಊಟ ಕಡಿಮೆ ಮಾಡಿ. ಓಂದು ಹೊತ್ತು ಊಟ ಕಡಿಮೆ ಮಾಡಲಾಗದಿದ್ದರೂ ಮಾಡುವ ಪ್ರತಿಯೊಂದು ಊಟವನ್ನೂ ಹೊಟ್ಟೆ ಬಿರಿಯುವಂತೆ ತಿನ್ನದೇ ಇನ್ನು ಸ್ವಲ್ಪ ತಿನ್ನಬಹುದು ಎಂಬಲ್ಲಿಗೆ ಊಟ ಮುಗಿಸದರೆ ಒಳ್ಳ್ತೆಯದು. ಹೆಚ್ಚು ಊಟಮಾಡುವುದರಿಂದ ನಮ್ಮ ದೇಹದ ಎಲ್ಲ ಕೊಶಗಳಿಗು ಹೆಚ್ಚಿನ ಒತ್ತಡ ತರುತ್ತದೆ , ಈ ಒತ್ತಡವೇ ಹಲವಾರು ಖಾಯಿಲೆಗಳ ತವರೂರು. 

೩. ಹೇರಳವಾಗಿ ನೀರು ಕುಡಿಯಬೇಕು. ಮನುಷ್ಯನ ದೇಹ ಶೇಕಡ ೭೦ ಕ್ಕಿಂತ ಹೆಚ್ಚು ನೀರಿನಿಂದ ಮಾಡಲ್ಪಟ್ಟಿದೆ. ಹಾಗಾಗಿ ನೀರು ನಮ್ಮ ಆಹಾರದ ಮುಖ್ಯ ಭಾಗವಾಗಿರಬೇಕು. ಹಾಗೆಂದು ನೀವು ಮಾರುಕಟ್ಟೆ ಯಲ್ಲಿ ಸಿಗುವ ತರಾವರಿ ಜ್ಯೂಸ್ ಕುಡಿದರೆ ಅದು ನೀರು ಕುಡಿದಂತಲ್ಲ. ನಮ್ಮ ಸಂಪ್ರದಾಯದಂತೆ ತಾಮ್ರದ ಚಂಬಿನಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದು ನಮ್ಮ ಲಿವರಿನ ಅರೊಗ್ಯಕ್ಕೆ ಉತ್ತಮ. ನೀರು ನಮ್ಮ ದೇಹದ ಕಲ್ಮಷಗಳನ್ನು ದೇಹದಿಂದ ಹೊರಹಾಕಿಸುತ್ತದೆ, ಪ್ರತಿಯೊಂದು ಕೋಶಕ್ಕೂ ಆಹಾರವನ್ನು ತಲುಪಿಸುತ್ತದೆ. 

೪. ನಮ್ಮ ಅಹಾರದ ಶೇಕಡ ೭೦ ಭಾಗ ತರಕಾರಿ ಮತ್ತು ಹಣ್ಣಿನಿಂದ ಕೂಡಿರಬೇಕು. ಸಸ್ಯಾಹಾರ ನಮ್ಮ ದೇಹಕ್ಕೆ ಅತ್ತ್ಯುತ್ತಮ. ಜೀವದಿಂದ ತುಂಬಿರುವ ತರಕಾರಿ ಮತ್ತು ಹಣ್ಣು ಗಳನ್ನು ತಿನ್ನುವುದು ನಿರ್ಜೀವವಾದ ಮಾಂಸಾಹಾರ ತಿನ್ನುವುದಕ್ಕಿಂತ ಎಷ್ಟೋ ಮೇಲು. 

೫. ದಿನದ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಮೂವತ್ತು ನಿಮಿಷಗಳಕಾಲ ಹೊರಗಡೆ ಶುದ್ದವಾದ ಗಾಳಿ ಸಿಗುವಕಡೆ ಓಡಾಡುವುದು ನಮ್ಮ ಆರೊಗ್ಯಕ್ಕೆ ಉತ್ತಮ. ಈ ಸಮಯಗಳಲ್ಲಿ ಹೊರಗಡೆಯಿರುವುದರಿಂದ ನಮ್ಮ ದೇಹದ ಜೈವಿಕ ಗಡಿಯಾರದ ಚಾಲನೆ ಉತ್ತಮಗೊಳ್ಳುತ್ತದೆ. ಹಾಗೆಯೆ ನಮ್ಮ ಪಾದವು ಪಾದರಕ್ಷೆಗಳಿಲ್ಲ್ಸದೇ ಹುಲ್ಲಿನ ಮೇಲಾಗಲಿ ಮಣ್ಣಿನ ಮೇಲಾಗಲಿ ನಡೆದಾಡಿದರೆ ನಮ್ಮಲ್ಲಿನ ನೆಗೆಟಿವ್ ಶಕ್ತಿಯನ್ನು ಭೂಮಿ ಹೀರಿಕೊಳ್ಳುತ್ತದೆ. 

೬. ನಿಮ್ಮ ಮನಸ್ಸು ಸದಾ ನೀವು ಉಸಿರಾಡುವುದನ್ನು ಗಮನಿಸುತ್ತಿರಲಿ. ಸಾಮಾನ್ಯ ನಾವ್ಯರೂ ಉಸಿರಾಡುವುದನ್ನು ಗಮನಿಸುವುದೇ ಇಲ್ಲಾ. ನಾವು ಅನ್ನ ನೀರು ಇಲ್ಲದೇ ದಿನಗಟ್ಟಲೇ ಬದುಕಿರಬಹುದು ಆದರೇ ಉಸಿರಾಟವಿಲ್ಲದೇ ಕೆಲವು ಗಂಟೆಗಳ ಕಾಲ ಕೂಡಾ ಬದುಕಿರಲಾರೆವು. ಇಷ್ಟೋಂದು ಮುಖ್ಯವಾಗಿರು ಉಸಿರಾಟವನ್ನು ನಾವ್ಯಾರೂ ಗಮನಿಸುವುದೇ ಇಲ್ಲಾ, ಹಾಗಾಗಿ, ನಾವು ಉಸಿರಾಡುವ ರೀತಿ ಅನಿಯಮಿತವಾಗಿರುತ್ತದೆ. ನಾವು ಯಾವಾಗಲೂ ನಿಯಮಿತವಾಗಿ ಧೀರ್ಘವಾಗಿ ಮತ್ತು ಸುಲಲಿತವಾಗಿ ಉಸಿರಾಡುವುದನ್ನು ಕಲಿಯಬೇಕು. ನಮ್ಮ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ಮಾತ್ರ ನಮ್ಮ ಉಸಿರಾಟವನ್ನು ನಿಯಮಿತ ಗೊಳಿಸು ವುದು ಸಾಧ್ಯ. ಯೊಗದಲ್ಲಿ ಹೇಳುವ ಪ್ರಾಣಾಯಾಮ ಈ ಅಂಶವನ್ನೇ ಒತ್ತಿ ಹೇಳುತ್ತದೆ. ಹಾಗೆ ಯೋಗದ ಅತ್ತ್ಯುತ್ತಮ ಸ್ಟಿತಿಯಾದ ಸಮಾಧಿ ಸ್ಟಿತಿ ಸೇರಲು, ನಮ್ಮ ಉಸಿರಾಟ ಕ್ರಿಯೆಯನ್ನು ನಿಯಮಿತ ಗೊಳಿಸುವ ಮತ್ತು ನಮ್ಮ ಮನಸ್ಸ್ಸನ್ನು ಉಸಿರಾಟದಲ್ಲಿ ಕೇಂದ್ರೀಕರಿಸುವುದು ಮೊದಲನೇ ಹೆಜ್ಜೆ. 

೭. ದಿನಕ್ಕೆ ೭ರಿಂದ ೮ ಗಂಟೆ ನಿದ್ದೆ ಮಾಡುವುದು ನಮ್ಮ ಆರೋಗ್ಯಕ್ಕೆ ಅತ್ಯವಶ್ಯಕ. 

೮. ಧೂಮಪಾನ ಮತ್ತು ಅಲ್ಕೋಹಾಲ್ ಗಳಿಂದ ದೂರವಿರಬೇಕು.

ಗುರುವಾರ, ಜನವರಿ 2, 2014

ಒಮಾನ್: ಕನ್ನಡ ಸಂಘಗಳು ಮತ್ತು ಕನ್ನಡಿಗರ ಮದ್ಯೆ ಯಾಕೆ ಇಷ್ಟೊಂದು ಅಂತರ?


ಒಮಾನ್ ನಲ್ಲಿ ೨೦೧೦ರ ಜನಗಣತಿಯ ಪ್ರಕಾರ ೨೭.೭೩ ಲಕ್ಷ ಜನಸಂಖ್ಯೆ ಯಿದ್ದು, ಅದರಲ್ಲಿ ೧೯.೧೫ ಲಕ್ಷ ಒಮಾನಿಗಳು ಉಳಿದ ೮.೧೬ ಲಕ್ಷ ವಲಸೆ ಕೆಲಸಗಾರರಿದ್ದುಇವರಲ್ಲಿ ಅಂದಾಜು ೨೫ ಸಾವಿರ ಕರ್ನಾಟಕದವರಿದ್ದು, ಮಸ್ಕತ್ ಹಾಗು ಸುತ್ತ ಮುತ್ತ ಸುಮಾರು ೧೫ಸಾವಿರಕ್ಕೂ ಹೆಚ್ಚು ಜನ ವಾಸಿಸುತಿದ್ದಾರೆ ಎನ್ನುವುದು ಆಸಕ್ತಿಕರ ಸಂಗತಿ, ಇನ್ನುಳಿದಂತೆ ಸೋಹಾರ್, ಸಲಾಲ್ಹ, ಸುರ್, ನಿಜ್ವ ಇಬ್ರ ಮತ್ತು ಮುಂತಾದ ಕಡೆ ಕನ್ನಡಿಗರು ನೆಲೆಗೊಂಡಿದ್ದಾರೆ. ಆದರೆ ಮಸ್ಕತ್, ಸೋಹಾರ್ ಮತ್ತು ಸಲಾಲ ಕನ್ನಡ ಸಾಮಾಜಿಕ ವಿಭಾಗದಲ್ಲಿ ಎಲ್ಲ ಸೇರಿ ಕೇವಲ ೫೦೦ ಜನ ನೊಂದಾಯಿತ ಸದಸ್ಯರಿರುವುದು ಕನ್ನಡ ಸಂಘಗಳ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.
ಒಮಾನ್ ಕನ್ನಡ ಸಂಘಗಳು ಒಮಾನ್ ನಲ್ಲಿ ವಾಸಿಸುತ್ತಿರುವ ಕನ್ನಡಿಗರ ಜನಮಾನಸಕ್ಕೆ ಹತ್ತಿರವಾಗುವ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಕೊರಗು ಬಹಳ ಜನರಿಂದ ಕೇಳಿಬರುತಿತ್ತು. ಕನ್ನಡ ಸಂಘಗಳು ಮತ್ತು ಕನ್ನಡಿಗರ ಮದ್ಯೆ ಯಿರುವ ಅಂತರ ಅಜಗಜಾಂತರ ಇದೆ ಎನ್ನುವುದಕ್ಕೆ ಸಂಘದ ಕಾರ್ಯ ಚಟುವಟಿಕೆ ಗಳೇ ಸಾಕ್ಷಿ. ಯಾವುದೇ ಕಾರ್ಯಕ್ರಮ ಆಯೋಜಿಸಿದರು ಪ್ರೇಕ್ಷಕರ ಸಂಖ್ಯೆ ೨೦೦-೩೦೦ ದಾಟುವುದಿಲ್ಲ. ಯಾವುದಾದರು ಒಂದು ಸಂಧರ್ಭದಲ್ಲಿ ಕರ್ನಾಟಕದಿಂದ ಕಲಾವಿದರನ್ನು ಕರೆಸಿದಾಗ ಮಾತ್ರ ಜಾಸ್ತಿಯೆಂದರೆ ಒಂದು ೫೦೦ ಜನ ಜಮಾವಣೆ ಆಗಬಹುದೇನೋ. 
ಕೆಲವರು ಹೇಳುವ ಪ್ರಕಾರ ಕೆಲ ಸಂಘಗಳಲ್ಲಿ ಗುಂಪುಗಾರಿಕೆ, ಮತ್ತೆ ಕೆಲ ಪಟ್ಟ ಭದ್ರ ಹಿತಾಸಕ್ತಿ ಗಳ ಕೈವಾಡ, ಜತೆಗೆ ಇನ್ನೂ ಕೆಲವರು ತಮ್ಮ ಏಕ ಮುಖ ಧೋರಣೆ ಅನುಸರಿಸುತಿದ್ದು, ತಮಗೆ ಇಷ್ಟ ಬಂದಾಗ ಅಥವ ತಮಗೆ ಬಿಡುವಾದಾಗ ಮಾತ್ರ ಕಾರ್ಯಕ್ರಮ ಗಳನ್ನು ಆಯೋಜಿಸಿತ್ತುರುವುದು ಬಹಳ ಜನರ ಬೇಸರಕ್ಕೆ ಕಾರಣವಾಗಿದೆ. ೩-೪ ತಿಂಗಳು ಒಂದೂ ಕಾರ್ಯಕ್ರಮ ನಡೆಯದೆ ಇತ್ತೀಚೆಗೆ ಒಂದೇ ತಿಂಗಳಲ್ಲಿ ಎರಡೆರೆಡು ಕಾರ್ಯಕ್ರಮ ಏರ್ಪಡಿಸಿದ್ದು ಬಹುಜನರಿಗೆ ಸರಿ ಕಾಣಲಿಲ್ಲ.
ಜನರಲ್ಲಿ ಕನ್ನಡ ನಾಡು ನುಡಿ ಬಗ್ಗೆ ಅಭಿಮಾನ ಹೆಚ್ಚಿಸುವಂತ ಕೆಲಸ  ಅದರಲ್ಲೂ ಇಂದಿನ ಮಕ್ಕಳಲ್ಲಿ ಕನ್ನಡಭಿಮಾನ ಕಿಚ್ಚನ್ನು ಹೊತ್ತಿಸುವ ಯಾಕೆ ಮಾಡ್ತಯಿಲ್ಲ ಅಂತ ಬಹಳ ಜನರಲ್ಲಿ ಕೊರಗಿದೆ. ಕೆಲವರಿಗೆ ಸಂಘದ ಖಾಯಂ ಪ್ರತಿನಿಧಿ ಯಾಗಿರಬೇಕು, ಆದರೆ ಯಾವುದೇ ಹೊಸತನಕ್ಕೂ ನಾಂದಿಯಾಡದೆ, ಕ್ರಿಯಾಶೀಲ ಚಟುವಟಿಕೆ ಗಳಿಲ್ಲದೆ, ಜನ ಸಾಮನ್ಯರ ಇಚ್ಚೆ ಯನ್ನರಿಯದೆ ಸಂಘವನ್ನು ಮುನ್ನೆಡೆಸುವ ರೀತಿ ಅನುಭವಿ ಸಂಘಟಕರಿಗೆ ಶೋಭೆ ತರುವಂತದ್ದಲ್ಲ ಎನ್ನುವುದು ಹಲವರ ಅನಿಸಿಕೆ. ಸಂಘದ ಕಾರ್ಯವ್ಯಾಪ್ತಿ, ಬದ್ದತೆ ಮತ್ತು ಕಾರ್ಯಕ್ಷೇತ್ರದ ಬಗ್ಗೆ ಸಂಘಗಳಲ್ಲಿ ಆಗಿಂದಾಗ್ಗೆ ಚರ್ಚೆ ನಡೆದು ಪ್ರತಿ ವರ್ಷ ಅದಕ್ಕೊಂದು ಹೊಸರೂಪ ಕೊಟ್ಟು ಅದನ್ನು ಕಾರ್ಯರೂಪಕ್ಕೆ ತರುವಂತೆ ಮಾಡುವುದು ಅವರ ಪ್ರಥಮ ಕರ್ತವ್ಯ ಅಂತ ಭಾವಿಸಬೇಕು. ಪ್ರತಿಯೊಬ್ಬ ಕನ್ನಡಿಗರಿಗೂ ಒಂದೊಂದು ಆಸಕ್ತಿ ಯಿರುತ್ತದೆ, ಎಲ್ಲವಯೋಮಾನದವರನ್ನು ಸಂಪರ್ಕಿಸಿ ಅವರ ಆಸಕ್ತಿ ಯನ್ನರಿತು ಅದಕ್ಕನುಗುಣವಾಗಿ ಕಾರ್ಯಕ್ರಮಗಳನ್ನು ನಡೆಸಿದರೆ ಪ್ರತಿಯೊಬ್ಬರನ್ನು ಸಂತೋಷ ಪಡಿಸುವ ಪ್ರಯತ್ನ ಖಂಡಿತ ಯಶಸ್ವಿ ಯಾಗುವುದರಲ್ಲಿ ಸಂಶಯವಿಲ್ಲ.

ಒಮಾನ್ ಕನ್ನಡ ಸಂಘಗಳು ಮತ್ತು ಕನ್ನಡ ಜನಸಾಮಾನ್ಯರ ಮಧ್ಯೆ ಇಷ್ಟೊಂದು ಅಂತರ ಯಾಕೆ? ಜನರ ಭಾವನೆಯನ್ನು ಇವರ್ಯಾರು ಅರಿತಿಲ್ವೇ? ಅಥವ ಸಂಘಗಳಲ್ಲಿ ಹೊಂದಾಣಿಕೆಯ ಅಭಾವವಿದೆಯೆ? ನಾಣ್ಯಕ್ಕೆ ಎರಡು ಮುಖ ಇರುವ ಹಾಗೆ,

ಆ ಇನ್ನೊಂದು ಮುಖವನ್ನು ನೋಡುವ ಪ್ರಯತ್ನದಲ್ಲಿ ಕೆಲ ತಿಂಗಳುಗಳ ಹಿಂದೆ ಮೇಲಿನ ಗೊಂದಲಗಳ ಬಗ್ಗೆ ವಿವರಗಳನ್ನು ತಿಳಿಯಲು ಆಗ ಮಸ್ಕತ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಯುತ ಅನಿಲ್ ಭಾಸಗಿ ಮತ್ತು ಸಲಾಲ್ಹ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಯುತ ರೊಸಾರಿಯೊ ಅವರನ್ನು ಸಂದರ್ಶಿಸಿದೆ, ಅದರ ಮೊದಲ ಭಾಗ ಮಾಜಿ ಅಧ್ಯಕ್ಷ ರಾದ ಶ್ರೀಯುತ ಅನಿಲ್ ಭಾಸಗಿ ಯವರ ಸಂದರ್ಶನದ ವಿವರ ಈ ಕೆಳಗಿದೆ.

ಮೂರು ತಿಂಗಳುಗಳ ಹಿಂದೆ ಆಗ ಅಧ್ಯಕ್ಷರಾಗಿದ್ದ ಶ್ರೀ ಅನಿಲ್ ಭಾಸಗಿ ಯವರನ್ನು ಸಂದರ್ಶಿಸಿ ಪಡೆದ ಸಂದರ್ಶನ




ಪ್ರ: ನೀವು ಕನ್ನಡ ಸಂಘದಲ್ಲಿ ಎಷ್ಟುವರ್ಷಗಳಿಂದ ಕೆಲಸ ಮಾಡ್ತಾಯಿದ್ದೀರಾ?
ಅನಿಲ್ ಭಾಸಗಿ ಯವರ ಉತ್ತರ: ಸುಮಾರಾಗಿ ಒಂದೂ ವರೆ ವರ್ಷದಿಂದ ಕೆಲಸಮಾಡ್ತಾಯಿದ್ದೀನಿ, ಮೊದಲು ೭-೮ ತಿಂಗಳು, ಎಂಟರ್ಟೆನ್ ಕೊಆರ್ಡಿನೇಟರ್ ಆಗಿ ಕೆಲಸಮಾಡಿದ್ದೆ, ಈಗ ಕನ್ವೀನರ್ ಆಗಿ ಮಾಡ್ತಾ ಯಿದ್ದಿನಿ.
ಪ್ರ: ಸಂಘದ ಕಾರ್ಯಕ್ಷೇತ್ರ ಮತ್ತು ವ್ಯಾಪ್ತಿ ಯ ಬಗ್ಗೆ ವಿವರ ನೀಡಿ.
ಉ: ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸೋದು, ಮಕ್ಕಳಲ್ಲಿ ಯಿರುವ ಪ್ರತಿಭೆ ಯನ್ನು ಗುರುತಿಸಿ, ಹಾಗೆ ನಾವೆಲ್ಲರು ವೃತ್ತಿಯನ್ನು ಅರಸಿ ಒಮಾನಿ ಗೆ ಬಂದಿದ್ದೀವಿ, ನಮ್ಮಲ್ಲೂ ಸಹ ಎಲ್ಲೋ ಒಂದು ಕಡೆ ಪ್ರತಿಭೆ ಯಿರುತ್ತೆ, ಅದನ್ನು ಪ್ರದರ್ಶಿಸೋದಿಕ್ಕೆ ಒಂದು ವೇದಿಕೆ ಸಿಕ್ಕಿರಲ್ಲ, ರಾಜ್ಯದಲ್ಲಾದರೆ ೧೦ ರಲ್ಲಿ ೧೧ ಆಗುವ ಸಂಭವ ವೇ ಹೆಚ್ಚು ಆದರೆ ಇಲ್ಲಿ ಇರುವ ೫ ಜನರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುವ ಅವಕಾಶ ವಿರುತ್ತೆ ಅವರಿಗಾಗಿ ಒಂದು ವೇದಿಕೆ ಯನ್ನು ಒದಗಿಸಿಕೊಡುವುದು. ಅಂತರವನ್ನು ನಾವು ಗುರುತಿಸಿ ಪ್ರೋತ್ಸಾಹ ನೀಡಿದರೆ ನಮ್ಮಲ್ಲೇ ಆ ಕಲಾವಿದ ಬೆಳೆಯಲು ಸಾಧ್ಯವಾಗುತ್ತದೆ. ಸಾಮಾಜಿಕ ಜವಬ್ದಾರಿ ಹೊಣೆ, ನಮ್ಮ ಕಾರ್ಯಕ್ರಮಗಳು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗದೆ ಸಮಗ್ರ ಕರ್ನಾಟಕದ ಚಿತ್ರಣವನ್ನು ನಮಗೆ ಹಾಗು ನಮ್ಮ ಮಕ್ಕಳಿಗೆ ಪರಿಚಯ ಮಾಡಿಕೊಡುವುದು. ಇಂದಿನ ಮಕ್ಕಳಲ್ಲಿ ಕರ್ನಾಟಕ ರಾಜ್ಯದ ಕಲ್ಪನೆ ಸರಿಯಾಗಿ ಮೂಡಿಲ್ಲ ಹಾಗು ಮೂಡುತ್ತಿಲ್ಲ, ಅದರ ಅರಿವನ್ನು ನೀಡೋದು. ಕನ್ನಡಿಗರು ಅಂತ ಹೆಮ್ಮೆ ಪಡುವುದಕ್ಕೆ ನಾವು ಏನು ನಮ್ಮಲ್ಲಿ ಏನಿದೆ, ಐತಿಹಾಸಿಕ ಪರಂಪರೆ ಯುಳ್ಳ ನಮ್ಮ ರಾಜ್ಯ ದ ಇತಿಹಾಸ ದ ಸಮಗ್ರ ಚಿತ್ರಣ ವನ್ನು ಪ್ರದರ್ಶಿಸುವುದು.
ಪ್ರ: ಈ ನಿಮ್ಮ ಕಲ್ಪನೆ ನಿಜವಾಗಿಯೂ ಸಾಕಾರ ಗೊಂಡಿದೆಯಾ?
ಉ: ನಾನು ಸಂಘದಲ್ಲಿ ಸಕ್ರಿಯ ವಾಗಿರುವುದು ಕೇವಲ ೧೮ ತಿಂಗಳು ಮಾತ್ರ, ಈ ಅವಧಿಯಲ್ಲಿ ಸಾಧಿಸಿದ್ದು ಬಲು ಕಡಿಮೆ, ಸಾಧಿಸಬೇಕಾದದ್ದು ಬಹಳಷ್ಟಿದೆ. ಇದಕ್ಕೂ ಮುಂಚೆ ನಡೆದ ಸಂಘದ ಚಟುವಟಿಕೆ ಗಳ ಬಗ್ಗೆ ನನಗೆ ಅಷ್ಟೊಂದು ಮಾಹಿತಿಯಿಲ್ಲ
ಪ್ರ: ಕರ್ನಾಟಕ ವಿಭಾಗ, ಭಾರತೀಯ ಸಾಮಾಜಿಕ ಸಂಸ್ಥೆ ಯ ಅಧೀನ ದಲ್ಲಿದೆಹೀಗಿರುವಾಗ ನಿಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯನ್ನು ಮೀರಿ ಏನನ್ನಾದರು ಮಾಡಿದ್ದೀರಾ?
ಊ: ಇಲ್ಲ, ಇದುವರೆವಿಗೂ ಮಾಡಿಲ್ಲ. ISC ಅಧೀನ ನಲ್ಲಿ ಹಾಗು ಅವರು ರೂಪಿಸಿರುವ ನಿಯಮಾವಳಿಗಳಿಗೆ ಒಳಪಟ್ಟು ನಮ್ಮ ಕೆಲಸವನ್ನು ನಾವು ಮಾಡ್ತಾಯಿದ್ದೀವಿ. ಕಾರ್ಯಕ್ರಮಗಳ ವಿವರ ವನ್ನು ISC ಗೆ ರವಾನಿಸಿ ಮಾಹಿತಿ ಕೊಟ್ಟು ಮುಂದಿನ ಕೆಲಸಗಳನ್ನು ಮಾಡಬೇಕಾಗುತ್ತೆ.
ಪ್ರ: ನಿಮ್ಮ ಈಗಿನ ಕಾರ್ಯಾವಧಿ ಯಲ್ಲಿ ಯಾವುದಾದರು ಸವಾಲು ಎನಿಸುವಂತಹ( ಚಾಲೆಂಜಿಂಗ್) ಕೆಲಸವನ್ನು ನಿರ್ವಹಿಸಿದ್ದೀರಾ? ಅಂತಹ ಸಂಧರ್ಭ ಬಂದಿದೆಯಾ? ಕ್ಲಿಷ್ಟಕರವಾದ ಪರಿಸ್ಥಿತಿ ಯನ್ನು ಎದುರುಸಿದ್ದೀರಾ?
ಉ: ಹೌದು, ಸ್ಥಳೀಯ ಪ್ರತಿಭೆ ಗಳನ್ನು ಗುರುತಿಸುವುದು ಬಹುದೊಡ್ಡ ಸವಾಲು. ನಮ್ಮಲ್ಲಿರುವ ೨೧೦ ಸದಸ್ಯರಲ್ಲಿ ಯಾರು ಯಾವ ಕ್ಷೇತ್ರದಲ್ಲಿ ಪ್ರತಿಭಾವಂತರು? ಅವರಿಗೆ ಹೇಗೆ ಸೂಕ್ತ ವೇದಿಕೆ ಯನ್ನು ಒದಗಿಸುವುದು ಎನ್ನುವುದು ನಮ್ಮ ಮುಂದಿರುವ ದೊಡ್ಡ ಸವಾಲು.
ಪ್ರ: ಸಂಘದ ನಿಮ್ಮ ಕಾಲಾವಧಿ ಯಲ್ಲಿ ಏನು ಸಾಧನೆ ಮಾಡಿದ್ದೀರಾ?
ಉ: ಅಂತದ್ದೇನು ಸಾಧಿಸಿಲ್ಲ.
ಪ್ರ: ಸಂಘದ ಸದಸ್ಯರೆಷ್ಟು?
ಉ: ೨೧೦ ಜನ.
ಪ್ರ: ಸದಸ್ಯರನ್ನು ಜಾಸ್ತಿ ಮಾಡಬೇಕು ಅಂತ ಯೋಚನೆ ಯಿದೆಯಾ?
ಉ: ಹೌದು, ಇದೆ. ಸಂಘದ ಹಳೆಯ ಸದಸ್ಯರನ್ನು ಮರಳಿ ಕರೆತರುವ ಪ್ರಯತ್ನ ನಡೀತ ಯಿದೆ. ಜನ ಜಾಸ್ತಿ ಯಾದಷ್ಟು, ಕೆಲಸ ಮಾಡುವ ಹುಮ್ಮಸ್ಸು ಜಾಸ್ತಿಯಾಗುತ್ತೆ. ಖುಷಿ ಯಾಗುತ್ತೆ.
ಪ್ರ: ಸದಸ್ಯರನ್ನು ಹೆಚ್ಚು ಮಾಡುವ ಕೆಲಸ ಇಷ್ಟುದಿನ ಯಾಕೆ ಮಾಡಲಿಲ್ಲ? ಇಷ್ಟು ವರ್ಷಗಳಿಂದ ಕೇವಲ ೧೦೦ ಅಥವ ೨೦೦ ಜನರನ್ನು ನೊಂದಾಯಿಸಿಕೊಂಡು ಈ ೨೦೦ ರ ಗಡಿಯೊಳಗೆ ಯಾಕಿದ್ದೀರ? ನಿಮಗಿಂತ ಹಿಂದಿನ ಕನ್ವೀನರ್ ಗಳು ಯಾಕೆ ಈ ಕೆಲಸ ವನ್ನು ಮಾಡಲಿಲ್ಲ. ನೀವಂತು ಇತ್ತಿಚಿಗೆ ಜವಬ್ದಾರಿಯನ್ನು ಹೊತ್ತು ಕೊಂಡಿದ್ದೀರಾ, ನೀವು ಹಿಂದೆ ಈ ಪ್ರಶ್ನೆ ಯನ್ನು ಅವರಿಗೆ ಕೇಳಿದ್ದೀರಾ?
ಉ:ಇಲ್ಲ. ನಾನು ಕನ್ವೀನರ್ ಆಗುವ ಮುಂಚೆ, ಸದಸ್ಯ ನಾಗಿದ್ದೆ. ನಾವು ಕನ್ನಡಿಗರಿಗೆ ಸಂಘ ಜೀವಿಗಳಾಗಿ, ಹೊಂದಿಕೊಂಡು ಸಾಮಾಜಿಕ ಬದ್ದತೆ ಇಟ್ಟುಕೊಂಡು ಜೀವಿಸಿಕೊಂಡು ಹೋಗುವುದರಲ್ಲಿ ಅಥವ ಅದರ ಅರಿವನ್ನು ಮೂಡಿಸಬೇಕಾಗಿದೆ.
ಪ್ರ: ಈ ವಿಷಯದಲ್ಲಿ ಸಂಘ ಎಡವಿದೆ ಅಂತ ಅನ್ನಿಸುತ್ತ?
ಉ: ಇಲ್ಲ. ಇದು ಎಲ್ಲರ ಜವಾಬ್ದಾರಿ, ಮನುಷ್ಯ ಸಂಘ ಜೀವಿ, ಸಂಘ ಹಾಗೂ ಸದಸ್ಯರ ಜವಬ್ದಾರಿ. ನನ್ನ ಅನುಭವದ ಪ್ರಕಾರ, ಇದರಲ್ಲಿ ಎರಡು ಕಾರಣಗಳಿರಬಹುದು ಒಂದು ಕನ್ನಡಿಗರಲ್ಲಿ ಆಸಕ್ತಿ ಕಡಿಮೆ ಯಿರಬಹುದು ಅಥವ ಆಸಕ್ತಿಯನ್ನು ಬೆಳೆಸುವುದಕ್ಕೆ ಸಂಘ ಪ್ರಯತ್ನಿಸದೇ ಇರಬಹುದು. ಬೇರೆ ಭಾಷೆಯವರಲ್ಲಿ ಇರುವ ಹಾಗೆ ಕನ್ನಡಿಗರಲ್ಲಿ ಭಾಷಾ ಅಭಿಮಾನ ಕಡಿಮೆಯಿರೋದು ಸಹ ಒಂದು ಕಾರಣ. ಮುಂಚೆ ಹೊರದೇಶಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಕನ್ನಡಿಗರು ಸಿಗ್ತಾಯಿದ್ದರು, ಎಲ್ಲರೂ ಒಂದುಗೂಡುವುದಕ್ಕೆ ಸಂಘ ಒಂದು ಕಾರಣವಾಗ್ತಾಯಿತ್ತು. ಆದರೆ ಈಗ, ಚಿಕ್ಕ ಚಿಕ್ಕ ಗುಂಪು ಗಳಾಗಿ, ಕೆಲವರು ಮನೆ ಮನೆ ಗಳಲ್ಲಿ ಗೆಟ್ ಟುಗೆದರ್, ಹಾಗೆ ಪಿಕ್ ನಿಕ್ ಮುಂತಾದವುಗಳಲ್ಲಿ ಒಟ್ಟಿಗೆ ಸೇರ್ತಾಯಿರೋದು, ಅಲ್ಲಿ ಅವರೇ ಮುಖ್ಯವಾಗಿರ್ತಾರೆ ಹಾಗೂ ಇಂತಹ ಚಿಕ್ಕ ಚಿಕ್ಕ ಕಾರ್ಯಕ್ರಮಗಳಲ್ಲಿ ಅವರೆಲ್ಲರಿಗೂ ಪ್ರಾಶಸ್ತ್ಯ ಸಿಗುವುದರಿಂದ, ಸಂಘದ ಎಲ್ಲ ಚಟುವುಟಿಕೆಗಳಿಗೆ ಭಾಗವಹಿಸುವುದರಲ್ಲಿ ನಿರಾಸಕ್ತಿ ಯಿರಬಹುದು. ಹಾಗೆ ಇಂದಿನ ಮಾಧ್ಯಮ ಸಹ ಒಂದು ಕಾರಣ, ಒಂದಲ್ಲೊಂದು ಚಾನೆಲ್ ನ ಲೈವ್ ಕಾರ್ಯಕ್ರಮದಲ್ಲಿ ಒಬ್ಬರಲ್ಲ ಒಬ್ಬರು ಕಲಾವಿದರು ಬರ್ತಾಯಿರ್ತಾರೆ. ಮತ್ತೊಂದು ಈಗಿನ ಕಾಲದ ಮಕ್ಕಳ ಶಿಕ್ಷಣ ಪದ್ದತಿ, ಪರಿಕ್ಷೆಗಳ ಒತ್ತಡ, ಹೀಗೆ ಮಕ್ಕಳ ಕಾರ್ಯಕ್ರಮ ಏರ್ಪಡಿಸುವುದಕ್ಕೆ ಬಹಳ ತೊಡಕುಗಳು ಜತೆಗೆ ಮಸ್ಕತ್ ನ GEOGRAPHICAL LOCATION ತೊಂದರೆ. ನೃತ್ಯ ಕಾರ್ಯಕ್ರಮ ವೇರ್ಪಡಿಸಿದರೆ, ಮಕ್ಕಳಿಗೆ ತರಬೇತಿ ಕೊಡುವುದಕ್ಕೆ ಹಾಗು ಕೇಂದ್ರ ಕ್ಕೆ ಬಿಡೋದು ಮತ್ತು ವಾಪಾಸ್ಸು ಕರೆದುಕೊಂಡು ಹೋಗೋ ತೊಂದರೆಗಳು. ಮಸ್ಕತ್ತಿನ ಸಾರಿಗೆ ವ್ಯವಸ್ಥೆ ಯ ತೊಂದರೆ. ಸಮಯದ ಅಭಾವ, ಬಹಳಜನರಿಗೆ ಆಸಕ್ತಿಯಿರುತ್ತದೆ ಆದರೆ ಹೀಗೆ ಹಲವಾರು ತೊಂದರೆಗಳಿಂದ ಜನ ದೂರ ಸರಿತಾರೆ.
ಪ್ರ: ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಲ್ಲಿ ಕನ್ನಡಿಗರಲ್ಲಿ ಆಸಕ್ತಿ ಕಡಿಮೆ ಯಿದೆಯಾ?
ಉ: ಕನ್ನಡಿಗರಲ್ಲಿ ನಿರಾಸಕ್ತಿಯಿಲ್ಲ ಆದರೆ, ಅವರ ಆಸಕ್ತಿಯನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ.
ಪ್ರ: ಸಂಘದಿಂದ ವರ್ಷದಲ್ಲಿ ಎಷ್ಟು ಕಾರ್ಯಕ್ರಮ ನಡೆಸಿದ್ದೀರಾ?
ಉ: ಒಂದು ೫-೬ ಕಾರ್ಯಕ್ರಮ ಮಾಡಿರಹುದು. ದೊಡ್ಡ ಪ್ರಮಾಣದಲ್ಲಿ ಅಂತದ್ದೇನೂ ಮಾಡಲಿಕ್ಕಾಗಲಿಲ್ಲ.
ಪ್ರ: ನಿಮ್ಮ ಸಂಘದ ಸಾಮಾಜಿಕ ಬದ್ಧತೆ ಏನು?
ಉ: ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸೋದು, ಅದು ನಮ್ಮ ದೊಡ್ಡ ಸಾಮಾಜಿಕ ಬದ್ದತೆ.
ಪ್ರ: ಜನರಲ್ಲಿ ಕನ್ನಡ ಅಭಿಮಾನ ವನ್ನು ಬೆಳೆಸಿ, ಅದರ ಕಿಚ್ಚನ್ನು ಹೊತ್ತಿಸುವ ಕಾರ್ಯಕ್ರಮಗಳ ಕೊರತೆ ಬಹು ಕಾಡುತ್ತಿದೆ.  ನಿಮ್ಮ ಯಾವುದೆ ಕಾರ್ಯಕ್ರಮಗಳಲ್ಲಿಇಂತಹ ಕೆಲಸ ಮಾಡೆಇಲ್ಲ. ಕನಿಷ್ಟ ಪಕ್ಷ ಒಂದು ಭಾಷಣ ಇಲ್ಲ, ಒಂದು ಅಭಿಮಾನದ ನುಡಿ ಇಲ್ಲ. ನೀವು ಸಿದ್ದ ಪಡಿಸಿಕೊಂಡ ಕಾರ್ಯಕ್ರಮ ಮಾಡಿ ಮುಗಿಸುವುದೆ ನಿಮ್ಮ ಆದ್ಯತೆ ಯಾಗಿ ಕಾಣುತ್ತಿದೆ. ಕಳೆದಬಾರಿಯ ೨೦೧೨ ರಾಜ್ಯೋತ್ಸವ ಕೇವಲ ಒಂದು ಆರ್ಕೆಸ್ಟ್ರಾ ಗೆ ಸೀಮಿತವಾಗಿತ್ತು. ರಾಜ್ಯೋತ್ಸವದಲ್ಲಿ ಕನ್ನಡ ಅಭಿಮಾನಕ್ಕೆ ಬೆಲೆ ಇಲ್ವಾ?
ಉ: ಅದು ಆಗಲಿಲ್ಲ, ಆದರೆ ಈ ಸಾರಿ ಖಂಡಿತ ಮಾಡ್ಬೇಕಾಗಿತ್ತು, ಕಾರಾಣಾಂತರಗಳಿಂದ ಆಗಲಿಲ್ಲ.
ಪ್ರ: ನಿಮ್ಮ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವದ ತೊಂದರೆ ಏನಾದರು ಆಗಿದೆಯಾ?
ಉ: ಇಲ್ಲ, ಹಲವಾರು ಪ್ರಾಯೋಜಕರ ಸಹಕಾರ ಹಾಗೂ ಸಂಘದ ಕಾರ್ಯಕರ್ತರ ಪರಿಶ್ರಮದಿಂದ ಅಂತಹ ತೊಂದರೆ ಆಗಿಲ್ಲ.
ಪ್ರ: ನಮ್ಮ ಸಾಮನ್ಯ ಕನ್ನಡಿಗರ ಜವಬ್ದಾರಿ ಯೇನು? ಮಸ್ಕತ್ ಕನ್ನಡಿಗರಿಂದ ನಿಮ್ಮ ನಿರೀಕ್ಷೆ ಯೇನು
ಉ: ಎಲ್ಲರೂ ಸಂಘದ ಸದಸ್ಯರಾಗಿ, ಸಂಘದ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಉತ್ಸಾಹ ತೋರಿಸಿ, ಆಡಳಿತ ಮಂಡಳಿಯ ಸದಸ್ಯರಿಗಿಂತ, ಸಂಘದ ಸದಸ್ಯರು ಬಹು ಮುಖ್ಯ. ಎರಡು ಕಡೆ ಉತ್ತಮ ಭಾಂದವ್ಯ ಇರುವುದು ಒಳ್ಳೆಯದು. ಇದನ್ನು ಬೆಳೆಸುವ ಕಾರ್ಯ ಇಬ್ಬರಿಂದಲೂ ಆಗಬೇಕು.
ಪ್ರ: ನಿಮ್ಮ ಕಾರ್ಯಕ್ರಮ ಗಳ ಆಹ್ವಾನ ಹೇಗೆ. ಕಾರ್ಯಕ್ರಮವನ್ನು ಪ್ರೋತ್ಸಾಹಿಸಲು ಜನರನ್ನು ಹೇಗೆ ಆಕರ್ಷಿಸುತ್ತೀರ?
ಉ: ನಮ್ಮಲ್ಲಿ ಎರಡು ತರಹ ಕಾರ್ಯಕ್ರಮ ಇದೆ ಒಂದು, Inhouse, ಆಮೇಲೆ outdoor-open to all, Inhouse ಕಾರ್ಯಕ್ರಮಕ್ಕೆ Email ಮತ್ತು SMS ಮುಖಾಂತರ ಆಹ್ವಾನ. ಹಾಗೆ outdoor-open to all ಕಾರ್ಯಕ್ರಮ ಕ್ಕೆ ಪತ್ರಿಕೆ ಗಳಲ್ಲಿ ಆಹ್ವಾನ ಕೊಡುತ್ತೀವಿ.
ಪ್ರ: ಕಾರ್ಯಕ್ರಮ ಗಳು ಮುಗಿದ ಮೇಲೆ, ಮಾಧ್ಯಮಗಳಲ್ಲಿ ಯಾಕೆ ಮಾಹಿತಿ ನೀಡ್ತಾಯಿಲ್ಲ. ಪ್ರಚಾರ ಯಾಕೆ ಮಾಡ್ತಯಿಲ್ಲ.
ಉ: ಈಗ ಶುರು ಮಾಡ್ತೀವಿ.
ಪ್ರ: ಕರ್ನಾಟಕ ರಾಜ್ಯದ ಕನ್ನಡ ಸಂಸ್ಕೃತಿ ಇಲಾಖೆ ಗೆ ನಿಮ್ಮ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೊಡ್ತಾಯಿದ್ದೀರಾ?
ಉ: ಇನ್ನು ಮುಂದೆ ಮಾಡ್ತೀವಿ. ಈಗ ಮಂತ್ರಿ ಯಾಗಿರುವ ಶ್ರೀ ಉಮಾಶ್ರಿ ಯವರಿಗೆ ಕಳುಹಿಸಿದ್ದೇವೆ.
ಪ್ರ: ಸಂಘದ ಚುನಾವಣೆ ಬಗ್ಗೆ ಮಾಹಿತಿ ನೀಡಿ.
ಉ: ಎರಡು ವರ್ಷಕೊಮ್ಮೆ, ಚುನಾವಣೆ ನಡೆಯುತ್ತೆ. ಈ ಸಾರಿ ಅವಿರೋಧವಾಗಿ ಆಯ್ಕೆ ಆಯ್ತು.
ಪ್ರ: ನೀವು ನಿರ್ಧಾರಗಳನ್ನು ಹೇಗೆ ತಗೋತೀರಾ? ಎಲ್ಲರ ಒಪಿನಿಯನ್ ತಗೋತೀರಾ ಅಥವ ಒಬ್ಬರ ಒಪಿನಿಯನ್ ಗೆ ಮಾತ್ರ ಮನ್ನಣೆ ಕೊಡ್ತಿರಾ?
ಉ: ಎಲ್ಲರ ಒಪಿನಿಯನ್ ಗಳನ್ನು ಪರಿಶೀಲಿಸಿ, ಉತ್ತಮ ನಿರ್ಧಾರವನ್ನು ಒಟ್ಟಿಗೆ ತಗೋತೀವಿ.
ಪ್ರ: ಸ್ಥಳೀಯ ಪ್ರತಿಭೆ ಗಳಿಗೆ ಮನ್ನಣೆ ನೀಡಿ, ಪ್ರತಿಭಾ ಪುರಸ್ಕಾರ ನೀಡ್ತಾಯಿದ್ದೀರಾ?
ಉ: ಹೌದು, ಆ ಕೆಲಸ ಪ್ರತಿ ವರ್ಷ ನಡೆಯುತ್ತೆ. ಮೊದಲಿಗೆ ನಾನು ಸಹ ಪ್ರತಿಭಾ ಪುರಸ್ಕಾರ ದ ಫಲಾನುಭವಿ. ಮಕ್ಕಳಿಗಾಗಿ ಪ್ರತಿ ವರ್ಷ, quiz, drawing competion ಇರುತ್ತೆ, ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿಕೊಡ್ತೀವಿ.
ಪ್ರ: ಕನ್ನಡ ಸಂಘದಿಂದ ಮಕ್ಕಳಿಗಾಗಿ ಕನ್ನಡ ಕಲಿಸುವ ಕಾರ್ಯಕ್ರಮ ನಡೆಸ್ತಾಯಿದ್ದೀರಾ? ಕನ್ನಡ ಕಲಿಸುವ ಶಿಕ್ಷಕರಿಗೆ, ಸಂಘದ ವತಿಯಿಂದ ಏನಾದರೂ ಸಂಭಾವನೆ ನೀಡ್ತಾಯಿದ್ದೀರ?
ಉ: ಮಕ್ಕಳಿಗಾಗಿ ಕನ್ನಡ ತರಗತಿಗಳು ನಡೀತಾ ಇವೆ, ಶಿಕ್ಷಕರಿಗಾಗಿ ಸಂಭಾವನೆ ಇಲ್ಲ. ಅದು ಅವರ ಸಮಾಜ ಸೇವೆ, ನಾವು ಸಹ ಸ್ವಯಂ ಪ್ರೇರಣೆಯಿಂದ ಯಾವುದೇ ಸಂಭಾವನೆ ಇಲ್ಲದೆ ಸಂಘದ ಚಟುವಟಿಕೆ ಯಲ್ಲಿ ಪಾಲ್ಗೊಂಡಿದ್ದೇವೆ.
ಪ್ರ: ನಿಮ್ಮ ಆಡಳಿತ ಮಂಡಳಿಯಲ್ಲಿ ೯ ಜನ ಸದಸ್ಯರಿದ್ದು, ಎಲ್ಲ ಕೆಲಸಗಳನ್ನು ಸದಸ್ಯರ ಮುಖಾಂತರ ಮಾಡಿಸುವುದು ಬಹು ದೊಡ್ಡ ಸವಾಲು, ಆದ್ದರಿಂದ ಸಹಾಯಕ್ಕಾಗಿ Volunteers ಪಡೆ ನಿಮ್ಮಲಿದ್ದಾರ?
ಉ: ಪಡೆ ಅಂತ ಏನಿಲ್ಲ, ಉತ್ಸಾಹ ಹಾಗೂ ಆಸಕ್ತಿಯಿರುವ ಸ್ವಯಂ ಪ್ರೇರಣೆ ಯಿಂದ ಮುಂದೆ ಬರುವವರಿಗೆ ಅವಕಾಶ ಕೊಟ್ಟಿದ್ದೇವೆ.
ಪ್ರ: ಜನರಲ್ಲಿ ಕನ್ನಡ ಅಭಿಮಾನ ಬೆಳೆಸುವ ಕಾರ್ಯಕ್ರಮ ಏನು ಮಾಡಿದ್ದೀರಾ?
ಉ: ಪ್ರತಿ ಕಾರ್ಯಕ್ರಮದಲ್ಲಿ ನಾವು ಮಾಡಿದ್ದೇವೆ, ಕನ್ನಡ ಅಭಿಮಾನ ಜನರಲ್ಲಿ ಬರಬೇಕು ಅದು ಪ್ರತಿಯೊಬ್ಬರ ಜವಬ್ದಾರಿ.
ಪ್ರ: ಸಂಘದಿಂದ ಸಾಹಿತ್ಯ ಚಟುವಟಿಕೆ ಕಾರ್ಯಕ್ರಮ ಗಳು ತುಂಬಾ ಕಡಿಮೆ ಆಗ್ತಾಯಿದೆ.
ಉ: ಹಾಗೆನಿಲ್ಲ, ಹಿಂದೆ ನಡೆದಿದೆ, ಮುಂದೇನೂ ನಡೆಯುತ್ತೆ.
ಪ್ರ: ಕನ್ನಡಿಗರ ಮದ್ಯೆ ಭಾವನಾತ್ಮಕ ಬಾಂಧವ್ಯ ಬೆಳೆಸುವಂತಹ ಕೆಲಸ ಏನ್ ಮಾಡಿದ್ದೀರಾ? ಸಂಘದ ಜವಬ್ದಾರಿ ಏನುವರ್ಷಕ್ಕೆ ೫-೬ ಕಾರ್ಯಕ್ರಮ ಮಾಡಿ ಮುಗಿಸಿದರೆ ನಿಮ್ಮ ಜವಬ್ದಾರಿ ಮುಗಿತಾ? ಜನ ಬರ್ತಾರೋ ಬಿಡ್ತಾರೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದು ಈ ವರ್ಷದ ಅಜೆಂಡಾ, ಇದು ಮುಗಿಸಬೇಕು. ಅಷ್ಟಾದ್ರೆ ಹೆಂಗೆ?
ಉ: ಅದು ಹಾಗಲ್ಲ, ಎಲ್ಲ ವಯೋಮಾನದವರನ್ನು ಬೇರೆ ಬೇರೆ ಆಸಕ್ತಿ ಯಿರುವ  ಎಲ್ಲರನ್ನು ತೃಪ್ತಿ ಪಡಿಸೋದು ಕಷ್ಟ. ಅದಕ್ಕಾಗಿ ಬೇರೆ ಬೇರೆ ಕಾರ್ಯಕ್ರಮ ಮಾಡಿ ಜನರನ್ನು ರಂಜಿಸೋ ಕಾರ್ಯಕ್ರಮ ನಡೀತಾಯಿದೆ. ಇದು ಕೇವಲ ಸಂಘದ ಜವಬ್ದಾರಿಯಲ್ಲ. ಕನ್ನಡಿಗರು ಸಹ ತಮ್ಮ ತಮ್ಮ ಆಸಕ್ತಿ ಅನುಗುಣವಾಗಿ ಕಾರ್ಯಕ್ರಮ ಗಳ ವಿವರ ತೆಗೆದು ಕೊಂಡು ಬಂದರೆ ಅದನ್ನು ಪರಿಶೀಲಿಸಿ ನಾವು ನಿರ್ಧಾರ ತೆಗೆದುಕೊಂಡು ಅದನ್ನು ನಡೆಸೋದು ನಮ್ಮ ಜವಬ್ದಾರಿ.
-----****-----
ಹೊಸ ಉದ್ಯೋಗದ ಜವಬ್ದಾರಿಯನ್ನು ಹೊತ್ತು ಶ್ರೀ ಅನಿಲ್ ಭಾಸಗಿಯವರು ಮಸ್ಕತ್ ನಿಂದ ನಿರ್ಗಮಿಸುತಿದ್ದಾರೆ. ಈ ಸಂಧರ್ಭದಲ್ಲಿ ಇಷ್ಟೊಂದು ಮಾಹಿತಿ ಹಂಚಿಕೊಂಡು ನಮ್ಮ ಜತೆ ಮಾತನಾಡಿದ್ದಕ್ಕೆ ಧನ್ಯವಾದಗಳನ್ನು  ಅರ್ಪಿಸುತ್ತಈ ಮೇಲಿನ ಸಂದರ್ಶನ ಈಗಿರುವ ಆಡಳಿತ ಮಂಡಳಿಗೆ ಹಾಗು ಒಮಾನ್ ಕನ್ನಡಿಗರಿಗೆ ಈ ಒಂದು ಚಿಕ್ಕ ವಿಚಾರ ವಿನಿಮಯ ಎಲ್ಲೋ ಒಂದುಕಡೆ ಮಾರ್ಗದರ್ಶಿ ಯಾಗುತ್ತದೆ ಎಂದು ಭಾವಿಸುತ್ತೇನೆ.
ಕನ್ನಡ ಸಂಘ ನಿರ್ವಹಿಸುತ್ತಿರುವ ಎಲ್ಲ ಕಾರ್ಯಕ್ರಮಗಳು ಇನ್ನಷ್ಟು ತುಂಬಾ ಚೆನ್ನಾಗಿ ಮೂಡಿ ಬರಲಿ ಎಂದು ಆಶಿಸುತ್ತ, ಜತೆಗೆ ಒಮಾನ್ ನಲ್ಲಿ ನೆಲಸಿರುವ ಎಲ್ಲ ಕನ್ನಡಿಗರು ಕನ್ನಡ ಸಂಘದಲ್ಲಿ ಸದಸ್ಯತ್ವ ಪಡೆದು ಬರುವ ದಿನಗಳಲ್ಲಿ ಎಲ್ಲರು ಒಂದಾಗಿ ಮತ್ತಷ್ಟು ದೊಡ್ಡದಾಗಿ ಬೆಳೆಸೋಣ  

ಲೇಖಕರು: ರಂಗನಾಥ. ಪಿ.ಎಸ್





ಮಸ್ಕತ್: ವಿಜ್ರಂಭಣೆಯಿಂದ ನಡೆದ ಶ್ರೀ ಆಂಜನೇಯ ಸ್ವಾಮಿ ಪೂಜೆ

ಮಸ್ಕತ್: ವಿಜ್ರಂಭಣೆಯಿಂದ ನಡೆದ ಶ್ರೀ ಆಂಜನೇಯ ಸ್ವಾಮಿ ಪೂಜೆ

ಓಮಾನ್ ಕರ್ನಾಟಕ ಆರಾಧಾನ ಸಮಿತಿಯು (ಓಂಕಾರ) ಕಳೆದ ವರ್ಷ ೨೦೧೨ ರಲ್ಲಿ ಆಯೋಜಿಸಿದ್ದಂತೆ ಈ  ಬಾರಿ ೨೭ ಡಿಸೆಂಬರ್ ೨೦೧೩ ರಂದು ಶ್ರೀ ಆಂಜನೇಯ ಪೂಜೆ ಯನ್ನು ಮಸ್ಕತ್ ನ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಆಯೋಜಿಸಿದ್ದರು. ಬೆಳಿಗ್ಗೆ ೮:೩೦ ಪ್ರಾರ್ಥನೆ ಯಿಂದ ಶುರುವಾದ ಕಾರ್ಯಕ್ರಮ, ಸಂಕಲ್ಪ, ಮೂರ್ತಿ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಮಹಾ ಅಭಿಷೇಕ, ಸುವರ್ಣ ಕಿರೀಟ ಸಮರ್ಪಣೆ, ಅಲಂಕಾರ, ಹರಿವಾಯುಸ್ತುತಿ, ಹನುಮಾನ್ ಚಾಲೀಸ, ಭಜನೆ, ಮಹಾ ಮಂಗಳಾರತಿ ತದನಂತರ ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.


ಬೆಳಿಗ್ಗೆ ೮:೩೦ ರಿಂದ ಪೂಜೆಗೆ ಆಗಮಿಸಿದ ಸಾವಿರಾರು ಭಕ್ತರು, ಮಧ್ಯ್ಹಾನ ಮಹಾ ಪ್ರಸಾದ ವಿನಿಯೋಗದ ವರೆವಿಗೂ ಪಾಲ್ಗೊಂಡು ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದು ವಿಶೇಷ ವಾಗಿತ್ತು. ಜತೆಗೆ ಹಲವಾರು ಸ್ವಯಂ ಸೇವಾ ಕಾರ್ಯಕರ್ತರು, ಸಾರ್ವಜನಿಕ ಭಕ್ತರು ಈ ಧಾರ್ಮಿಕ ಕಾರ್ಯಕ್ಕೆ ಆಗಮಿಸಿ ತನು, ಮನ, ಧನದ ಸಹಕಾರ ನೀಡಿ ಪೂಜೆಯ ಯಶಸ್ಸಿಗೆ ಕಾರಣೀಭೂತರಾದರು. ಶ್ರೀ ಆಂಜನೇಯ ಸ್ವಾಮಿ ಪೂಜೆ ಬಹು ವಿಜ್ರಂಭಣೆ ಯಿಂದ ನಡೆದಿದ್ದಕ್ಕೆ ಈ ಸಂಧರ್ಭದಲ್ಲಿ ಸಾವಿರಾರು ಜನರು ಸಾಕ್ಷಿಗಳಾದರು. ಅದರಲ್ಲೂ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಕನ್ನಡದ ಕಲರವ ಹಿಂದೆಂದಿಗಿಂತಲೂ ಮಾರ್ದನಿಸುತಿತ್ತು.


ಪೂರ್ವಭಾವಿ ತಯಾರಿ: ಪೂಜಾಕಾರ್ಯಕ್ರಮದ ಪೂರ್ವಭಾವಿ ತಯಾರಿಕೆಯೊಂದಿಗೆ ಕಾರ್ಯಕಾರಿ ಸಮಿತಿ, ಉತ್ಸಾಹಿ ಸ್ವಯಂ ಸೇವಾ ಕಾರ್ಯಕರ್ತರ ತಂಡ ಕಳೆದ ಹಲವಾರು ದಿನಗಳಿಂದ ವ್ಯವಸ್ಥಿತವಾಗಿ ಕಾರ್ಯಯೋಜನೆಗಳನ್ನು ಸಿದ್ದ ಪಡಿಸಿಕೊಂಡು ಪೂಜಾ ಕಾರ್ಯದ ಯಶಸ್ಸಿನಲ್ಲಿ ಭಾಗಿಗಳಾದರು. ಪೂಜೆಗಾಗಿ ಬೆಂಗಳೂರಿನಿಂದ ವಿಶೇಷವಾಗಿ ಹೂವು, ಪೂಜ ಸಾಮಗ್ರಿ, ಶಲ್ಯ ಹಾಗು ಒಂದು ಸಾವಿರ ಹನುಮಾನ್ ಚಾಳಿಸಾ ಕನ್ನಡ, ಹಿಂದಿ/ಇಂಗ್ಲೀಶ್ ಪುಸ್ತಕಗಳನ್ನು ತರಿಸಿದ್ದರು.


ಪೂಜಾ ವೇದಿಕೆ: ಶ್ರೀ ಆಂಜನೇಯ ಪೂಜಾ ವೇದಿಕೆಯನ್ನು ಸ್ವಯಂ ಸೇವಾ ಕಾರ್ಯಕರ್ತರು ಮತ್ತು ಸಮಿತಿ ಸದಸ್ಯರು ಅತೀ ಉತ್ಸಾಹದಿಂದ ಫಲ ಪುಷ್ಪಗಳಿಂದ ಅಲಂಕರಿಸಿದ್ದರು. ಸುತ್ತಲೂ ಪುಷ್ಪಾಲಂಕಾರದೊಂದಿಗೆ , ಮಧ್ಯದಲ್ಲಿ ಬೃಹತ್ ಶ್ರೀ ಆಂಜನೇಯ ಚಿತ್ರಪಟ ಅದರ ಮುಂದೆ ಸುಂದರ ಶ್ರೀ ಆಂಜನೇಯ ವಿಗ್ರಹ, ಎರಡು ಬದಿಗಳಲ್ಲಿ ಶ್ರೀ ಆಂಜನೇಯ ಮತ್ತು ಶ್ರೀ ರಾಮ, ಲಕ್ಷ್ಮಣ ಮತ್ತು ಸೀತಾದೇವಿ ಕಟೌಟ್ ಇರಿಸಿದ್ದು, ಪೂಜಾ ಸಭಾಂಗಣದಲ್ಲಿ ಭಕ್ತ ಸಮೂಹವನ್ನು ಆಕರ್ಷಿಸುತ್ತಿತ್ತು.


ಪೂಜಾ ವಿಧಿ ವಿಧಾನ:- ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸಂಕಲ್ಪದೊಂದಿಗೆ ಪೂಜಾ ವಿಧಿ ವಿಧಾನಗಳನ್ನು ಶ್ರೀ ಲಕ್ಷ್ಮಿನಾರಾಯಣ ಆಚಾರ್ಯರು ಪ್ರಾರಂಭಿಸಿದರು.  ಶ್ರೀ ಆಂಜನೇಯ ವಿಗ್ರಹ ಪ್ರತಿಷ್ಠಾಪನೆಯ ನಂತರ, ಪಂಚಾಮೃತ ಹಾಗು ಗಂಧದ ಮಹಾಅಭಿಷೇಕ ನೆರೆವೇರಿಸಿದರು. ಮೂರ್ತಿಗೆ ಸುವರ್ಣ ಕಿರೀಟ ಧಾರಣೆ ಮಾಡಿ, ನಂತರ ಅಲಂಕಾರ, ಪೂಜೆ ಮತ್ತು ವಡಮಾಲ ಸಮರ್ಪಣೆ ಮಾಡಿದರು.


ಭಜನೆ ಮತ್ತು ಭಕ್ತಿ ಗೀತೆಗಳು: ರಾಮ ರಕ್ಷಾ ಸ್ತೋತ್ರ, ಪವಮಾನ, ಹರಿವಾಯು ಸ್ತುತಿ, ಹನುಮಾನ್ ಚಾಳಿಸಾ, ಆಂಜನೇಯ ಸ್ತೋತ್ರ, ಗಣಪತಿ, ಶ್ರೀಕೃಷ್ಣ, ಲಕ್ಷ್ಮಿ ದೇವಿ, ರಾಮನಾಮ, ಇನ್ನು ಮುಂತಾದ ದೇವರ ಹಾಡುಗಳನ್ನು, ಡಿವೈನ್ ಪಾರ್ಕ್, ತುಳುಕೂಟ, ಸಾಯಿ ಸಮಿತಿ, ಮತ್ತು GSB Group ನವರು ಹಾಡಿ ಭಕ್ತರನ್ನು ಭಾವ ಪರವಶಗೊಳಿಸಿದರುಕನ್ನಡದ ಭಕ್ತಿ ಗೀತೆಗಳು, ದೇವರ ನಾಮ, ಭಜನೆ ಗಳಿಂದ ಸಭಾಂಗಣದಲ್ಲಿ ವಿಶೇಷ ಮೆರುಗನ್ನು ನೀಡಿತ್ತು. ತಮಿಳುನಾಡು ಚೆನ್ನೈ ನಿಂದ ವಿಶೇಷವಾಗಿ ಬಂದಿದ್ದ ಶ್ರೀ ವಾಸುದೇವರಾವ್ (ಮೂಲತಃ ಬೆಂಗಳೂರಿನವರು) ಹರಿ ವಾಯು ಸ್ತುತಿ ಪಠಣ ಮಾಡಿದರು. ಶ್ರೀಯುತರು ಹರಿವಾಯುಸ್ತುತಿ ಯಲ್ಲಿ ಪಾರಂಗತರಾಗಿದ್ದು, ಭಾರತ ದೇಶದ ಎಲ್ಲೆಡೆ ಹಾಗು ವಿದೇಶಗಳಲ್ಲಿ ಸಹ ಸಾವಿರಾರು ಕಡೆ ಪಠಣ ಮಾಡಿದ್ದಾರೆ.

ಮಹಾಪ್ರಸಾದ ವಿತರಣೆ: ಮಹಾಮಂಗಾಳಾರತಿಯ ನಂತರ ತೀರ್ಥ ಪ್ರಸಾದ ಸ್ವೀಕರಿಸಿದ ನಂತರ ದೇವಸ್ಥಾನದ ಆವರಣ ದಲ್ಲಿ ಅತ್ಯಂತ ರುಚಿಯಾದ ಭೋಜನವನ್ನು ಮಹಾಪ್ರಸಾದವನ್ನಾಗಿ ಸ್ವೀಕರಿಸಿದ ಭಕ್ತ ಸಮೂಹ ಓಂಕಾರ ಸಮಿತಿಯವರನ್ನು ಎಲ್ಲೆಡೆ ಪ್ರಶಂಸಿತಿದ್ದುದ್ದನ್ನು ಕಂಡು ಬಂತುಪೂಜಾಕಾರ್ಯದಲ್ಲಿ ಮಹಾಪ್ರಸಾದ ವಿತರಣೆಯ ಜವಬ್ಧಾರಿಯನ್ನು ವಹಿಸಿಕೊಂಡಿದ್ದ ಕಾರ್ಯಕರ್ತರ ತಂಡ ವಿತರಣೆ ಕಾರ್ಯವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ಸೇವಾ ವಿವರ: ಸಾರ್ವಜನಿಕರಿಗೆಮಹಾಪ್ರಸಾದ ಸೇವೆಸರ್ವ ಸೇವೆಹರಿವಾಯುಸ್ತುತಿ/ ಹನುಮಾನ್ ಚಾಲಿಸಾ ಪಾರಾಯಣಹಾಗೂ ವಡಮಾಲೆ ಸಮರ್ಪಣೆ ಸೇವೆಯ ಸೌಲಭ್ಯ ನೀಡಿದ್ದರುಸೇವೆಸಲ್ಲಿಸಿದ ಭಕ್ತರಿಗೆಫಲ ಪುಷ್ಪತಾಂಬೂಲದೊಂದಿಗೆ ಸೇವೆಗೆ ತಕ್ಕಂತೆ ಓಂಕಾರ ಮುದ್ರಿತ ಬೆಳ್ಳಿನಾಣ್ಯ ಗಳನ್ನು ನೀಡಲಾಯಿತು

ಓಂಕಾರ ಸಮಿತಿಯ ವಿಶೇಷ ವೇನೆಂದರೆಇಲ್ಲಿ ಅಧ್ಯಕ್ಷಉಪಾದ್ಯಕ್ಷಖಜಾಂಚಿ ಎನ್ನುವ ಯಾವುದೇ ಹುದ್ದೆ ಗಳನ್ನು ಹೊಂದಿಲ್ಲದೆ ಎಲ್ಲ ಕಾರ್ಯಕರ್ತರು ಸ್ವಯಂ ಪ್ರೇರಣೆ ಯಿಂದ ತಮಗೆ ವಹಿಸಿದ ಕೆಲಸವನ್ನು ಕೆಲಸವನ್ನು   ಅಚ್ಚುಕಟ್ಟಾಗಿ ಜವಬ್ದಾರಿಯಿಂದ ನಿರ್ವಹಿಸಿ ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆಈ ಸಮಿತಿಯುಇದುವರೆಗೂ ಶ್ರೀ ಆಂಜನೇಯ ಪೂಜೆಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ,  ಶತಾವಧಾನಿ ಡಾರಾ. ಗಣೇಶ್ ರವರಿಂದ ಓಂಕಾರ ಜ್ಞಾನಾಮೃತ - ೨೦೧೩ಮತ್ತು  ಡಾ. ವಿಧ್ಯಾಭೂಷಣರವರಿಂದ ನಾದಾಮೃತ - ೨೦೧೩ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಸ್ಕತ್ ಕನ್ನಡಿಗರಿಗೆ ಭಕ್ತಿಜ್ಞಾನಾ ಮತ್ತು ಸಂಗೀತ ರಸದೌತಣವನ್ನು ನೀಡಿದೆ.

ಓಮಾನ್ ಕರ್ನಾಟಕ ಆರಾಧಾನ ಸಮಿತಿಯು ಶ್ರೀ ಆಂಜನೇಯ ಪೂಜೆಯನ್ನು ಅಯೋಜಿಸಿಭಕ್ತಾಧಿಬಂಧುಗಳಿಗೆ ಅವಕಾಶವನ್ನು ಕಲ್ಪಿಸಿ ಯಶಸ್ಸು ಪಡೆದ ಸರ್ವರಿಗೂ ನಾವು ಒಮಾನ್ ಕನ್ನಡಿಗರ ಪರವಾಗಿ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.


ಲೇಖಕರು: ಪಿ.ಎಸ್.ರಂಗನಾಥಮಸ್ಕತ್